ಭವ್ಯ ಭಾರತದ ಹೃದಯದಲ್ಲಿ ಅಡಗಿರುವ ಪುಣ್ಯ ಕ್ಷೇತ್ರಗಳು ಅನೇಕ. ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಸಿಗದ ಸುಖ ಶಾಂತಿ ನೆಮ್ಮದಿ ಸಿಗುವುದಾದರೆ ಅದು ಋುಷಿ-ಮುನಿ, ಸಾಧು-ಸಂತರ ಬೀಡಾದ ಈ ಪುಣ್ಯ ಭರತ ಭೂಮಿಯಲ್ಲಿ ಮಾತ್ರ. ಪವಾಡವೆನ್ನಬಹುದಾದ ಕರಾವಳಿ ಭಾಗದಲ್ಲಿ ಪರಶುರಾಮ ಸೃಷ್ಟಿಯಿಂದ ನಿರ್ಮಾಣವಾದ ಭೂ ಭಾಗದಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ, ಕೋಡಿ ಗ್ರಾಮದ “ಕೋಡಿ ಬೆಂಗ್ರೆ”ಯೂ ಒಂದು. ಪೊಡವಿಗೊಡೆಯ ಶ್ರೀ ಕೃಷ್ಣನ ನಾಡಾದ ಉಡುಪಿಯಿಂದ 18 ಕಿ.ಮೀ ಬಂದರೆ ಹಕ್ಕಿಗಳ ಚಿಲಿಪಿಲಿ ಕಲರವದೊಂದಿಗೆ ಉದಯಿಸುವ ಸೂರ್ಯ, ಶಾಂತವಾಗಿ ಹರಿಯುತ್ತಿರುವ ಸ್ವರ್ಣ, ಸೀತಾ ಹಾಗೂ ಮಣ್ಣ ಹೊಳೆ ಇವುಗಳು ಒಂದಕ್ಕೊಂದು ರಮಣೀಯವಾಗಿ ಸಂಧಿಸಿ, ಪಶ್ಚಿಮದಲ್ಲಿ ಭೋರ್ಗರೆಯುವ ಅರಬ್ಬೀ ಸಮುದ್ರದ ಅಬ್ಬರದ ಅಲೆಗಳ ನಡುವೆ ಪವಾಡವೋ ಸದೃಶ್ಯವಾಗಿ ದಕ್ಷಿಣದಲ್ಲಿ ಏಕಮಾತ್ರ ಭೂ ಸಂಪರ್ಕವನ್ನು ಹೊಂದಿ ಸ್ವಚ್ಛ, ಪ್ರಕೃತಿ ರಮಣೀಯಂತೆಯಿಂದ ಕೂಡಿದ ದೈವ ದೇವರುಗಳ ನೆಲೆ ಬೀಡೇ ಈ ಪುಣ್ಯಕ್ಷೇತ್ರ “ಕೋಡಿ ಬೆಂಗ್ರೆ.”
Know more